June 22, 2026

20 ವರ್ಷಗಳಿಂದ ಪರಿಸರ ಸೇವೆ: ವರ್ಷಕ್ಕೆ ಲಕ್ಷಾನು ಸಸಿಗಳ ಬೆಳೆಸುವ ಹುಲಿಗೆಮ್ಮ ಅವರಿಗೆ ಪಿಡಿಒ ಸುರೇಶ್ ಚಲವಾದಿ ಅವರಿಂದ ಅಭಿನಂದನೆ

🟥 ಟಿ ಪಬ್ಲಿಕ್ ನ್ಯೂಸ್ ಗಂಗಾವತಿ
ದಿನಾಂಕ: 05/06/2026

“ಹಸಿರು ಪರಿಸರಕ್ಕಾಗಿ ಎರಡು ದಶಕಗಳ ಸೇವೆ – ವಡ್ಡರಹಟ್ಟಿಯ ಹೆಮ್ಮೆಯ ಪುತ್ರಿ ಹುಲಿಗೆಮ್ಮ”

ಗಂಗಾವತಿ: ಪರಿಸರ ಸಂರಕ್ಷಣೆ ಮತ್ತು ಹಸಿರು ಕ್ರಾಂತಿಯ ಮೂಲಕ ಸಮಾಜಕ್ಕೆ ಮಾದರಿಯಾಗಿರುವ ವಡ್ಡರಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡದ ಕ್ಯಾಂಪ್‌ನ ಶ್ರೀ ಹುಲಿಗೆಮ್ಮ ದೇವಿ ನರ್ಸರಿಯ ಹುಲಿಗೆಮ್ಮ ಅವರು ಕಳೆದ 20 ವರ್ಷಗಳಿಂದ ನಿರಂತರವಾಗಿ ಸಸಿ ಸಾಕಾಣಿಕೆ ಕಾರ್ಯದಲ್ಲಿ ತೊಡಗಿಸಿಕೊಂಡು ಪರಿಸರ ಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

2005 ರಿಂದ 2026ರವರೆಗೆ ಸತತವಾಗಿ ಕಾರ್ಯನಿರ್ವಹಿಸುತ್ತಿರುವ ಅವರು ಪ್ರತಿವರ್ಷ ಸುಮಾರು ಲಕ್ಷಕ್ಕೂ ಅಧಿಕ ವಿವಿಧ ಜಾತಿಯ ಸಸಿಗಳನ್ನು ಬೆಳೆಸಿ ರೈತರಿಗೆ, ಸಾರ್ವಜನಿಕರಿಗೆ ಹಾಗೂ ವಿವಿಧ ಸಂಘ-ಸಂಸ್ಥೆಗಳಿಗೆ ಪೂರೈಸುತ್ತಿದ್ದು, ಹಸಿರು ಪರಿಸರ ನಿರ್ಮಾಣದಲ್ಲಿ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಅವರ ಈ ಸೇವೆ ವಡ್ಡರಹಟ್ಟಿ ಗ್ರಾಮಕ್ಕೆ ಹೆಮ್ಮೆಯ ವಿಷಯವಾಗಿದೆ.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹುಲಿಗೆಮ್ಮ ಅವರು ವಡ್ಡರಹಟ್ಟಿ ಗ್ರಾಮ ಪಂಚಾಯಿತಿಗೆ 40 ಸಸಿಗಳನ್ನು ವಿತರಿಸುವ ಮೂಲಕ ಮತ್ತೊಮ್ಮೆ ಪರಿಸರ ಕಾಳಜಿಯನ್ನು ಮೆರೆದಿದ್ದಾರೆ. ಅವರ ಸೇವೆಯನ್ನು ಗುರುತಿಸಿ ವಡ್ಡರಹಟ್ಟಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಚಲವಾದಿ ಹಾಗೂ ಗ್ರಾಮದ ಹಿರಿಯರು, ಯುವಕರು ಗ್ರಾಮಸ್ಥರು ಸೇರಿ ಶ್ರೀ ಹುಲಿಗೆಮ್ಮ ದೇವಿ ನರ್ಸರಿ ಮಾಲೀಕರಾದ ಹುಲಿಗೆಮ್ಮ ಅವರಿಗೆ ಅಭಿನಂದನೆಗಳು ಸಲ್ಲಿಸಿದರು

ಗ್ರಾಮದ ಅಭಿವೃದ್ಧಿ ಹಾಗೂ ಪರಿಸರ ಸಂರಕ್ಷಣೆಗೆ ಹುಲಿಗೆಮ್ಮ ಅವರು ಸಲ್ಲಿಸಿರುವ ಸೇವೆ ಅನುಕರಣೀಯವಾಗಿದ್ದು, ಯುವ ಪೀಳಿಗೆಗೆ ಸ್ಪೂರ್ತಿದಾಯಕವಾಗಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

About The Author

error: Content is protected !!