February 22, 2026

2026 ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರೆ ಅಂಗವಾಗಿ ಪೂರ್ವಭಾವಿ ಸಭೆ 

ಗಂಗಾವತಿ ನಗರದ ವಾಲ್ಮೀಕಿ ಸರ್ಕಲ್ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಅಖಿಲ ಕರ್ನಾಟಕ ಮಹರ್ಷಿ ಶ್ರೀ ವಾಲ್ಮೀಕಿ ನಾಯಕ ಸಮಾಜದ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು

ಸಭೆಯ ಅಧ್ಯಕ್ಷತೆಯನ್ನು ವಹಿಸಿದ ತಾಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷರಾದ ವೀರಭದ್ರಪ್ಪ ನಾಯಕ ಮಾತನಾಡಿ  2026 ರ  ಶ್ರೀ ಮಠದ 28 ನೇ ವಾರ್ಷಿಕೋತ್ಸವ  ಹಾಗೂ ಲಿಂಗೈಕ್ಯ  ಜಗದ್ಗುರು  ಶ್ರೀ ಪುಣ್ಯಾನಂದಪುರಿ ಮಹಾಸ್ವಾಮಿಯವರ  19 ನೇ ವರ್ಷದ ಪುಣ್ಯರಾಧನೆ, ಮತ್ತು  ಜಗದ್ಗುರು ಡಾಕ್ಟರ್ ಶ್ರೀ ಪ್ರಸನ್ನಾನಂದ ಮಹಾ ಸ್ವಾಮೀಜಿಯವರ 18ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ, ಹಾಗೂ ಫೆಬ್ರುವರಿ  8 ಮತ್ತು 9 ನೇ ತಾರೀಕಿನಂದು ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ರಾಜನಹಳ್ಳಿ ಹರಿಹರ ದಾವಣಗೆರೆ ವಾಲ್ಮೀಕಿ ಸಮುದಾಯದ ಜನ ಜಾಗೃತಿ ಗಾಗಿ ನಡೆಯುವ 8 ನೇ ವರ್ಷದ ಜಾತ್ರಾ ಮಹೋತ್ಸವದಲ್ಲಿ ಎಲ್ಲರೂ ಭಾಗಿಯಾಗಿ ಎಂದರು

ಗಂಗಾವತಿ ನಗರಸಭೆ ಮಾಜಿ ಅಧ್ಯಕ್ಷ ಬಸಪ್ಪ ನಾಯಕ ಇವರನ್ನು  ಶ್ರೀ ಮಹರ್ಷಿ ವಾಲ್ಮೀಕಿ ರಾಜನಹಳ್ಳಿ ಗುರುಪೀಠದ ತಾಲೂಕ ಧರ್ಮದರ್ಶಿಗಳೆಂದು ಶ್ರೀಗಳು ಆಯ್ಕೆ ಮಾಡಿದರು ಈ ಸಂದರ್ಭದಲ್ಲಿ  ಸಮಾಜದ ಗುರುಹಿರಿಯರು ಸನ್ಮಾನಿಸಿದರು  ನಂತರ ಮಾತನಾಡಿ ನಮ್ಮ ಸಮಾಜದ ಏಳಿಗೆಗಾಗಿ ಶ್ರಮಿಸುತ್ತೇನೆ ಎಂದರು

ಈ ಸಂದರ್ಭದಲ್ಲಿ ಗಂಗಾವತಿ ನಗರದ ವಾಲ್ಮೀಕಿ ಸಮಾಜದ ಗುರುಹಿರಿಯರು ಭಾಗಿಯಾಗಿದ್ದರು   

About The Author