April 15, 2026

ಹೊಸಳ್ಳಿಯ ಸ.ಹಿ.ಪ್ರಾ.ಶಾಲೆಗೆ ದಾನವಾಗಿ ನೀಡಿದ ಸ.ನಂ. 16/5 ರಲ್ಲಿನ 05 ಎಕರೆ ಜಮೀನನ್ನು ಇಲಾಖೆಯ ಹೆಸರಿಗೆ ನೋಂದಣಿ ವಿವಾದದಲ್ಲಿ

ಟಿ ಪಬ್ಲಿಕ್ ನ್ಯೂಸ್
ದಿ:4/4/2026

ಹೊಸಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದಾನವಾಗಿ ನೀಡಿದ ಸರ್ವೇ ನಂಬರ್ 16/5 ರಲ್ಲಿನ 05 ಎಕರೆ ಜಮೀನನ್ನು ಇಲಾಖೆಯ ಹೆಸರಿಗೆ ನೋಂದಣಿ ಮಾಡಿಕೊಡುವ ಕುರಿತಂತೆ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗಂಗಾವತಿ ಪತ್ರ ಸಂ. ಕಲಂ.ಲೆವಿ3/ಪಹಣಿ/ ಶಾಲಾ ಆಸ್ತಿ ನೋಂದಣಿ/ಹೊಸಳ್ಳಿ/ಕು/45/2025-26 ದಿನಾಂಕ: 14-10-2025ರ ಉಲ್ಲೇಖದಂತೆ ಶ್ರೀ ಚನ್ನಬಸವಸ್ವಾಮಿ ತಂದೆ ಗುರು ಕೊಟ್ರಸ್ವಾಮಿ ಕಲ್ಮಠ ಗಂಗಾವತಿ ರವರು ತಮ್ಮ ಹೆಸರಿನಲ್ಲಿರುವ ಗಂಗಾವತಿ ತಾಲೂಕಿನ ವಿರುಪಾಪುರ ಗ್ರಾಮದ ಜಮೀನು ಸರ್ವೆ ನಂ.16/2 ರಲ್ಲಿನ 11-22 ರ ಪೈಕಿ ವಿಸ್ತೀರ್ಣ 5-00 (ಎ-ಗು) ಜಮೀನನ್ನು ‘ಅಧ್ಯಕ್ಷ ಶಾಲಾ ಸುಧಾರಕ ಸಮಿತಿ” ಇವರ ಹೆಸರಿನಲಿ ದಾನರೂಪವಾಗಿ ಹೊಸಳ್ಳಿ ಶಾಲೆಗೆ ದಿನಾಂಕ: 20.05.1980 ರಲ್ಲಿ ನೀಡಿದ್ದು, ಅದರಂತೆ ಕಲಂ ನಂ:09 ರಲ್ಲಿ ಈಗಾಗಲೆ ಪಹಣಿಯಲ್ಲಿಯೂ ನೋಂದಣಿಯಾಗಿರುತ್ತದೆ.

ಸದ್ರಿ ಶಾಲೆಯೂ ಅದೇ ಸರ್ವೆ ನಂಬರಿನಲ್ಲಿರುತ್ತದೆ, ಪ್ರಯುಕ್ತ, ಸದರಿ ಸರ್ವೆ ನಂ.16/2 ರಲ್ಲಿನ 11-22 ರ ಪೈಕಿ ವಿಸ್ತೀರ್ಣ 5-00(ಎ-ಗು) ಜಮೀನನ್ನು ಮಾನ್ಯ ರಾಜ್ಯಪಾಲರು, ಕರ್ನಾಟಕ ಸರಕಾರ ಇವರ ಪರವಾಗಿ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಗಂಗಾವತಿ ಇವರ ಹೆಸರಿಗೆ ಪಹಣೆಯಲ್ಲಿ ನೋಂದಣಿ ಮಾಡಿಕೊಡಲು ಕೋರಿರುತ್ತಾರೆ ಕಾರಣ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗಂಗಾವತಿ ಇವರ ಮೂಲ ಪತ್ರವನ್ನು ಲಗತ್ತಿಸಿ ಕಳುಹಿಸುತ್ತಾ, ತಾಲೂಕಿನ ಗಂಗಾವತಿ ಹೋಬಳಿಯ ವಿರುಪಾಪುರ ಗ್ರಾಮದ ಜಮೀನು ಸರ್ವೆ ನಂ.16/2 ರಲ್ಲಿನ 11-22ರ ಪೈಕಿ ವಿಸ್ತೀರ್ಣ 5-00 (ಎ-ಗು) ಜಮೀನನ್ನು ಅಧ್ಯಕ್ಷ ಶಾಲಾ ಸುಧಾರಕ ಸಮಿತಿ” ಇವರ ಹೆಸರಿನಲಿ ದಾನರೂಪವಾಗಿ ಹೊಸಳ್ಳಿ ಶಾಲೆಗೆ ದಿನಾಂಕ:20.05.1980 ರಲ್ಲಿ ನೀಡಿದ್ದು, ಅದರಂತೆ ಕಾಲಂ ನಂ:09 ರಲ್ಲಿ ಈಗಾಗಲೇ ಪಹಣಿಯಲ್ಲಿಯೂ ನೋಂದಣಿಯಾಗಿರುತ್ತದೆ. ಸದ್ರಿ ಶಾಲೆಯೂ ಅದೇ ಸರ್ವೆ ನಂಬರಿನಲ್ಲಿರುತ್ತದೆ, ಪ್ರಯುಕ್ತ, ಸದರಿ ಸರ್ವೆ ನಂ.16/2 ರಲ್ಲಿನ 11-22 ರಪೈಕಿ ವಿಸ್ತೀರ್ಣ 5-00 (ಎ-ಗು) ಜಮೀನನ್ನು ಮಾನ್ಯ ರಾಜ್ಯಪಾಲರು, ಕರ್ನಾಟಕ ಸರಕಾರ ಇವರ ಪರವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಗಂಗಾವತಿ ಇವರ ಹೆಸರಿಗೆ ಪಹಣೆಯಲ್ಲಿ ನೋಂದಣಿ ಮಾಡಿಕೊಡುವ ಕುರಿತು ಕುಲಂಕುಷಷವಾಗಿ ಪರಿಶೀಲಿಸಿ ದೃಡೀಕೃತ ದಾಖಲೆಗಳೊಂದಿಗೆ ಪಂಚನಾಮೆ ಮತ್ತು ವರದಿಯನ್ನು ಸಲ್ಲಿಸಲಾಗಿದೆ ಇಲ್ಲಿ ಸಾವಿರಾರು ಮಕ್ಕಳು ವಿದ್ಯಾ ಭ್ಯಾಸವನ್ನು ಪಡೆದುಕೊಂಡು ಹೆಚ್ಚುವರಿ ಹುದ್ದೆಯಲ್ಲಿ ಇರುತ್ತಾರೆ ಈಗ ಐದು ಎಕರೆ ಭೂಮಿಯಲ್ಲಿ ಮೂರು ಎಕ್ರೆ ಭೂಮಿಯನ್ನು ಗಂಗಾವತಿ ಶ್ರೀ ಕಲ್ಮಠ ತಾತನವರು ತಮ್ಮ ದಿನಕ್ಕೆ ನಕಾಶೆಯನ್ನು ಮಾಡಿಕೊಂಡಿರುತ್ತಾರೆ ಇದನ್ನು ಕೋರ್ಟಿನವಹಿವಾಟು ಮೂಲಕ ಆದೇಶ ಪತ್ರವನ್ನು ಪಡೆದುಕೊಂಡು 3 ಎಕರೆ ನಕಾಶೆಯನ್ನು ಮಾಡಿಕೊಂಡಿರುತ್ತಾರೆ 5 ಎಕರೆ ಭೂಮಿಯಲ್ಲಿ ಶಾಲೆಗೆ ಎರಡು ಎಕರೆ ಭೂಮಿಯನ್ನು ಬಿಟ್ಟು ಕೊಟ್ಟಿರುತ್ತಾರೆ.ಈ ಕುರಿತು ಜಿಲ್ಲಾಧಿಕಾರಿಗಳು ಕೊಪ್ಪಳ, ತಹಶೀಲ್ದಾರ್ ಕಾರ್ಯಾಲಯ ಗಂಗಾವತಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗಂಗಾವತಿ ಇವರಿಗೆ ಮನವಿ ಪತ್ರ ಸಲ್ಲಿಸುತ್ತೇವೆ ಹಾಗೂ ಕ್ಷೇತ್ರದ ಗಾಲಿ ಜನಾರ್ಧನ್ ರೆಡ್ಡಿ ಅವರಿಗೆ ದಿ.13-8-2024 ಮನವಿ ಪತ್ರಕೊಟ್ಟಿದೆ ಹೊಸಳ್ಳಿಯ ಶಾಲೆಯ ಬಗ್ಗೆಯಾವುದಕ್ಕೂ ಕ್ರಮ ತೆಗೆದುಕೊಂಡಿಲ್ಲ ಹಾಗೂ ಎಂ.ಪಿ. ರಾಜಶೇಖರ್ ಇಟ್ನಾಳ್ ಸರ ಅವರಿಗೆ ಗಮನಕ್ಕ ತಂದಿದ್ದರೂ ಗಮನ ಹರಿಸುತ್ತಿಲ್ಲ “ಹೊಸಳ್ಳಿಯ ಯುವಕರು ಸೇರಿ 3-04-2026 ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾಧ್ಯಮ ದವರೊಂದಿಗೆ ಊರಿನ ಹಿರಿಯರು ಯುವಕರು ಸೇರಿ ಮಾತನಾಡಿದ್ದು ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಇಲ್ಲವಾದಲ್ಲಿ ಮುಂದಿನ ದಿನಮಾನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಆದಷ್ಟು ಬೇಗ ಇದನ್ನು ಈಡೇರಿಸಬೇಕೆಂದು ತಮ್ಮಲ್ಲಿ ಕಳಕಳಿಯ ವಿನಂತಿಸಿಕೊಂಡಿದ್ದಾರೆ

ಟಿ ಪಬ್ಲಿಕ್ ನ್ಯೂಸ್
ನೈಜ ಸುದ್ದಿ – ನೇರ ಮಾತು

About The Author

error: Content is protected !!