May 30, 2026

ನಗರ ಠಾಣೆಗೆ ನೂತನ ಸಿ.ಪಿ.ಐ ಪ್ರಕಾಶ್ ಯಾತನೂರುಗೆ ಕರವೇ ನಾರಾಯಣಗೌಡ ಬಣದಿಂದ ಭರ್ಜರಿ ಸ್ವಾಗತ

🟥 ಟಿ ಪಬ್ಲಿಕ್ ನ್ಯೂಸ್ ಗಂಗಾವತಿ
ದಿನಾಂಕ : 15/05/2026

ಗಂಗಾವತಿ: ನಗರ ಪೊಲೀಸ್ ಠಾಣೆಗೆ ನೂತನ ಸಿ.ಪಿ.ಐ ಆಗಿ ಅಧಿಕಾರ ವಹಿಸಿಕೊಂಡಿರುವ ಶ್ರೀ ಪ್ರಕಾಶ್ ಆರ್. ಯಾತನೂರು ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡರ ಬಣ) ಗಂಗಾವತಿ ತಾಲೂಕು ಘಟಕದ ವತಿಯಿಂದ ಆತ್ಮೀಯ ಸ್ವಾಗತ ಕೋರಲಾಯಿತು.

ಸಂಘಟನೆಯ ಪದಾಧಿಕಾರಿಗಳು ಹೂಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಗಿಣಿಮೋತಿ ಮಾತನಾಡಿ, “ಗಂಗಾವತಿ ಭಾಗದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳು ಹಾಗೂ ವಿವಿಧ ದಂಧೆಗಳಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಜನಸ್ನೇಹಿ ಆಡಳಿತದ ಮೂಲಕ ಸಾರ್ವಜನಿಕರ ವಿಶ್ವಾಸ ಗಳಿಸಬೇಕು” ಎಂದು ಮನವಿ ಮಾಡಿದರು.

ನೂತನ ಸಿ.ಪಿ.ಐ ಪ್ರಕಾಶ್ ಆರ್. ಯಾತನೂರು ಅವರು ಸಾರ್ವಜನಿಕ ಸೇವೆಯಲ್ಲಿ ಯಶಸ್ಸು ಸಾಧಿಸಲಿ ಎಂದು ಸಂಘಟನೆಯ ಮುಖಂಡರು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ನಗರ ಘಟಕದ ಕಾರ್ಯದರ್ಶಿಗಳಾದ ಅಂಜಿನಿ ಗೊರೂರು, ಮಂಜುನಾಥ ಕಾಯಿಗಡ್ಡಿ, ಸಂಘಟನಾ ಕಾರ್ಯದರ್ಶಿಗಳಾದ ಪ್ರವೀಣ್ ಕುಮಾರ, ರಮೇಶ್ ಗಿಣಿಮೋತಿ, ಕಾರ್ಯಕಾರಿಣಿ ಸದಸ್ಯರಾದ ಮಂಜು ಕಾಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

About The Author

error: Content is protected !!