May 30, 2026

ಹೃದಯಸ್ಥಂಭನಕ್ಕೆ ಬಲಿಯಾದ ಯುವ ವಕೀಲ ಕನಕೇಶ ಮುರುಡಿ

🟥 ಟಿ ಪಬ್ಲಿಕ್ ನ್ಯೂಸ್ ಗಂಗಾವತಿ
ದಿನಾಂಕ : 21/05/2026

ಗಂಗಾವತಿ: ನ್ಯಾಯಾಲಯದ ಆವರಣದಲ್ಲೇ ಯುವ ವಕೀಲರೊಬ್ಬರು ಹೃದಯಸ್ಥಂಭನದಿಂದ ನಿಧನರಾದ ದುಃಖದ ಘಟನೆ ಬುಧವಾರ ಗಂಗಾವತಿಯಲ್ಲಿ ನಡೆದಿದೆ. ಕನಕಗಿರಿ ತಾಲ್ಲೂಕಿನ ಚಿಕ್ಕ ಮಾದಿನಾಳ ಗ್ರಾಮದ ಕನಕೇಶ ಮುರುಡಿ (26) ಮೃತ ದುರ್ದೈವಿ.

ತಾಲ್ಲೂಕು ನ್ಯಾಯಾಲಯದ ವಕೀಲರ ಸಂಘದ ಕೊಠಡಿಯಲ್ಲಿ ನಡೆದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಲವಲವಿಕೆಯಿಂದ ಭಾಗವಹಿಸಿದ್ದ ಕನಕೇಶ, ಬಳಿಕ ಊಟ ಮುಗಿಸಿ ಕ್ಯಾಂಟೀನ್‌ನಲ್ಲಿ ಇದ್ದಾಗ ಏಕಾಏಕಿ ಕುಸಿದು ಬಿದ್ದರು. ತಕ್ಷಣ ಸಹವಕೀಲರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಸಾಕಷ್ಟು ಸಂಕಷ್ಟಗಳ ನಡುವೆಯೂ ಕಾನೂನು ಪದವಿ ಪೂರ್ಣಗೊಳಿಸಿ ಆರು ತಿಂಗಳ ಹಿಂದಷ್ಟೇ ವಕೀಲ ವೃತ್ತಿ ಆರಂಭಿಸಿದ್ದ ಕನಕೇಶ ಅವರ ಅಕಾಲಿಕ ನಿಧನ ನ್ಯಾಯಾಂಗ ವಲಯದಲ್ಲಿ ದುಃಖದ ವಾತಾವರಣ ನಿರ್ಮಿಸಿದೆ. ಮೃತರು ತಾಯಿ, ತಮ್ಮ ಹಾಗೂ ಸಹೋದರಿಯನ್ನು ಅಗಲಿದ್ದಾರೆ.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

About The Author

error: Content is protected !!