August 21, 2026

ಪಿ.ಎಚ್.ಡಿ. ಪದವಿ ಪಡೆದ ಡಾ. ಹತ್ತಿಮರದ ಶರಣಬಸಪ್ಪ ನಾಯಕರಿಗೆ ಕುಮಾರರಾಮ ಸೇನೆ ವತಿಯಿಂದ ಸನ್ಮಾನ

🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿ
ದಿನಾಂಕ: 21/07/2026

ಗಂಗಾವತಿ: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾನಿಲಯದಿಂದ ಡಾಕ್ಟರ್ ಆಫ್ ಫಿಲಾಸಫಿ (ಪಿ.ಎಚ್.ಡಿ.) ಪದವಿ ಪಡೆದ ಗಂಗಾವತಿಯ ಮೂಲ ನಿವಾಸಿ ಹತ್ತಿಮರದ ಮನೆತನದ ಡಾ. ಶರಣಬಸಪ್ಪ ನಾಯಕರನ್ನು ಗಂಡುಗಲಿ ಕುಮಾರರಾಮ ಸೇನೆ ಹಾಗೂ ಅಖಿಲ ಕರ್ನಾಟಕ ಹರಿಹರ ಹಕ್ಕ-ಬುಕ್ಕ ನಾಯಕ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು.

ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರರಾಮನ ವಂಶಸ್ಥರಾದ ಎಚ್. ರಾಜೇಶ್ ನಾಯಕ, ಗ್ರಾಮೀಣ ಹಿನ್ನೆಲೆಯಿಂದ ಬಂದಿರುವ ಡಾ. ಶರಣಬಸಪ್ಪ ಅವರು ಶಾಲಾ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಲೇ ಉನ್ನತ ಶಿಕ್ಷಣದಲ್ಲಿ ಸಾಧನೆ ಮಾಡಿರುವುದು ಶ್ಲಾಘನೀಯ. ಅವರು “An Economic Analysis of Agro-Based Industries in Koppal District” ವಿಷಯದ ಕುರಿತು ಸಂಶೋಧನೆ ನಡೆಸಿ ಪಿ.ಎಚ್.ಡಿ. ಪದವಿ ಪಡೆದಿರುವುದು ಗಂಗಾವತಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಖಜಾಂಚಿ ನಾಗರಾಜ್ ನಾಯಕ, ಚಿರಂಜೀವಿ, ಎಚ್. ರಮೇಶ್, ಎಚ್. ಯಮನೂರ, ಅರುಣಾ ರಫಿ ಹಾಗೂ ಕುಮಾರರಾಮ ಸೇನೆಯ ಪ್ರಧಾನ ಕಾರ್ಯದರ್ಶಿ ಹರನಾಯಕ ಸೇರಿದಂತೆ ಇತರರು ಉಪಸ್ಥಿತರಿದ್ದು, ಡಾ. ಶರಣಬಸಪ್ಪ ನಾಯಕರಿಗೆ ಅಭಿನಂದನೆ ಸಲ್ಲಿಸಿದರು.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

Search You Tube: T Public News